Wednesday 11 July 2012

ಕೋರಿಕೆ



ಏನು ಮಾಡಲಿ ಜೀವವೆ ನೀನಿಲ್ಲದ
ಬರಿದಾದ ಮನೆ ಮನದಲಿ
ಕನವರಿಸುತಿಹೆ ಬಯಕೆಗಳು 
ನಿನ ಹೆಸರ ನೆನೆವಿನಲಿ..

ಆದ ಆವಾಂತರವ ಮತ್ತೆ ಮತ್ತೆ ನೆನೆದು
ದೂರಾದರೆ ಮತ್ತೆ ಒಂದಾಗವು ಮನವು
ಹಸಿಯಾದ ನೋವು ಬಲಿತು ಹುಣ್ಣಾಗುವ
ಮೊದಲು ಮನವರಿಕೆ ಮಾಡಿಕೊ
ನಮ್ಮ ಹೃದಯದಾಶೆಯ...

ದಂಡಿಸ ಬೇಡ ಮೃದುಲ ಮನವ
ಅರಳಿಹವು ವಾಂಛೆಗಳು
ಪ್ರೀತಿ ಬಳ್ಳಿಯಲಿ
ಬದುಕು ಕನಸಲಿ ಮಿಂದು,
ಮುರಿದು ಹೋಗಲು ಮನಸು
ಜಗದಿಯಿಲ್ಲ ಮದ್ದು… 

ಯಾರು ಇಲ್ಲ ಯಾರಿಗೆ
ಯಾಂತ್ರಿಕವಾಗಿವೆ ಎಲ್ಲವು
ಅರಿತು ಬೆರೆತು ಚಿಂತಿಸು,
ಬಾ ಹೊರಟು ಸುಮ್ಮನೆ
ನನ್ನ ಮನದ ಮನೆಯಲಿ
ಅರಿತು ಬೆರೆತು ಬಾಳಲು..!!

ಸಿ.ಎಸ್.ಮಠಪತಿ

No comments:

Post a Comment