ಪ್ರಶ್ನೆ
ಉತ್ತರವ
ಹುಡುಕಿ
ಹೊರಟ ಬದುಕು
ದಾರಿಯಲಿ ಎದುರಾಗುತ್ತಿವೆ
ಬರೀ ಪ್ರಶ್ನೆಗಳು…
ಕವನ
ಖಾಲಿ ಕಾಗದೆದೆಯ
ಮೇಲೆ ಗೀಚುವ
ಕವನಗಳಿಗೆ
ಓದುಗ ನೀನೇ ಕಿರಿಟ
ನೀನೇ ಮುಕುಟ…
ನಗುತ್ತಾರೆ
ನಗುತ್ತಾರವರು
ನನ್ನ ನೋಡಿ
ನಾನು ನಾನಾಗಿ
ಬದುಕುತ್ತಿರುವೆನಲ್ಲ,
ಅಷ್ಟು ಸಾಕು ಬಿಡಿ..
ಉತ್ತರವ ಹುಡುಕಿ
ಹೊರಟ ಬದುಕು
ದಾರಿಯಲಿ ಎದುರಾಗುತ್ತಿವೆ
ಬರೀ ಪ್ರಶ್ನೆಗಳು…
ಮೇಲೆ ಗೀಚುವ
ಕವನಗಳಿಗೆ
ಓದುಗ ನೀನೇ ಕಿರಿಟ
ನೀನೇ ಮುಕುಟ…
ನನ್ನ ನೋಡಿ
ನಾನು ನಾನಾಗಿ
ಬದುಕುತ್ತಿರುವೆನಲ್ಲ,
ಅಷ್ಟು ಸಾಕು ಬಿಡಿ..
ಪ್ರೀತಿಯ ತೊಟ್ಟಿಲು
ನೀ ಕಟ್ಟಿ ಹೋದ ಪ್ರೀತಿಯ
ತೊಟ್ಟಿಲು ನಿಂತು
ಹೋಗಿದೆ
ತೂಗುವ ಕೈಗಳಿಲ್ಲದೆ…
ಹೆಜ್ಜೆ ಗುರುತು
ನನ್ನೆದೆಯ ಪ್ರಾಂಗಣದಲಿ
ನಲಿ-ನಲಿದು ಸಹಸ್ರ
ಆಟವಾಡಿ ದೂರಾದೆ
ನಾನು ತಪ್ಪೇನು
ಅಂದುಕೊಂಡಿಲ್ಲ,
ನಿನ್ನ ಹೆಜ್ಜೆ ಗುರುತುಗಳು
ಅಚ್ಚಹಸುರಾಗಿ
ಉಳಿದುಕೊಂಡಿವೆಯಲ್ಲ
ಅಷ್ಟು ಸಾಕು…
ಮಾನದಂಡ
ನನ್ನ ಪ್ರೀತಿಯ
ಆಳವನ್ನಳೆಯಲು
ಅವಳು
ಉಪಯೋಗಿಸಿದ್ದು
ಅಪನಂಬಿಕೆ ಎಂಬ
ಮಾನದಂಡ....
ಮಡದಿ
ಸಹಬಾಳ್ವೆಯುತ
ಜೀವನ ನಡೆಸುತ್ತೇನೆಂದು
ಬಾಳಿಗೆ ಬಂದ ಮಡದಿ
ಈಗ ಕೇವಲ
ಸಿಹಿಯನ್ನಷ್ಟೇ ಹೀರುತ್ತಿದ್ದಾಳ...
ಸಮಾಧಿ
ಇಂದು ನನ್ನ
ಸಮಾಧಿಯ ಮುಂದೆ
ನಿಂತು ಕಣ್ಣೀರಿನ ಜತೆಗೆ
ಇಂದು ನನ್ನ
ಸಮಾಧಿಯ ಮುಂದೆ
ನಿಂತು ಕಣ್ಣೀರಿನ ಜತೆಗೆ
ಪುಷ್ಪವನು ಅರ್ಪಿಸುತ್ತಿರುವ
ನೀನು, ಅಂದು ಕೇವಲ
ನನ್ನ ಕಣ್ಗಳ
ಭಾಷೆಯನ್ನರಿತಿದ್ದರೆ
ಸಾಕಿತ್ತು...
ವಿಪರ್ಯಾಸ
ದಿನಾಲು ಏನನ್ನಾದರು
ಬರೆಯಲೇ ಬೇಕೆಂದು
ಮನಸ್ಸು ರಚ್ಚೆ ಹಿಡಿದಾಗ,
ಬುದ್ಧಿ ಹೊಟ್ಟೆ ಕಿಚ್ಚಿನಿಂದ
ಭಾವನೆಗಳನ್ನು
ಹುಟ್ಟು ಹಾಕುವುದೇ ಇಲ್ಲ...
ಪ್ರೀತಿಯ ಬೀಜ
ಹುಟ್ಟಿ
ಹೊರ ಬರಬೇಕಾಗಲು
ಬೇಕಾಗುವಗಳನ್ನೆಲ್ಲ
ನಿನ್ನ ಜೊತೆಗೆ
ಕೊಂಡೊಯ್ದೆ..
ಬರೀ ಪ್ರೀತಿಯ ಬೀಜವನು
ನನ್ನೆದೆಯಲಿಟ್ಟೆ….
ನೀನು, ಅಂದು ಕೇವಲ
ನನ್ನ ಕಣ್ಗಳ
ಭಾಷೆಯನ್ನರಿತಿದ್ದರೆ
ಸಾಕಿತ್ತು...
ವಿಪರ್ಯಾಸ
ದಿನಾಲು ಏನನ್ನಾದರು
ಬರೆಯಲೇ ಬೇಕೆಂದು
ಮನಸ್ಸು ರಚ್ಚೆ ಹಿಡಿದಾಗ,
ಬುದ್ಧಿ ಹೊಟ್ಟೆ ಕಿಚ್ಚಿನಿಂದ
ಭಾವನೆಗಳನ್ನು
ಹುಟ್ಟು ಹಾಕುವುದೇ ಇಲ್ಲ...
ಪ್ರೀತಿಯ ಬೀಜ
ಹುಟ್ಟಿ
ಹೊರ ಬರಬೇಕಾಗಲು
ಬೇಕಾಗುವಗಳನ್ನೆಲ್ಲ
ನಿನ್ನ ಜೊತೆಗೆ
ಕೊಂಡೊಯ್ದೆ..
ಬರೀ ಪ್ರೀತಿಯ ಬೀಜವನು
ನನ್ನೆದೆಯಲಿಟ್ಟೆ….
ವರ್ಷಧಾರೆ
ಬಾ ಗೆಳತಿ,
ಹೋದ ವರ್ಷದ
ಮುಂಗಾರು
ಮತ್ತೆ ಸುರಿಯುತಿದೆ
ಈ ಹಣಿವ ವರ್ಷಧಾರೆಯಲಿ
ಪ್ರೀತಿಯ ತೇರನೇರಿ
ಜಗವ ಮರಿಯುವ
ಕಾಗದದ ದೋಣಿಯ
ಹರಿದು ಬಿಡುತ...
ಮತ್ತೆ ಸುರಿಯುತಿದೆ
ಈ ಹಣಿವ ವರ್ಷಧಾರೆಯಲಿ
ಪ್ರೀತಿಯ ತೇರನೇರಿ
ಜಗವ ಮರಿಯುವ
ಕಾಗದದ ದೋಣಿಯ
ಹರಿದು ಬಿಡುತ...
ಹನಿ-ಹನಿ
ಈ ಸುರಿಯುತ್ತಿರುವ ಮಳೆ
ನಿಲ್ಲುವ ಸೂಚನೆಯೇ
ಇಲ್ಲ,
ಬಾ ಒಂದು ಸಾರಿ ನೆನೆದು
ಹೋಗೊಣ...
ಇಷ್ಟು ದಿನ ಬೆಚ್ಚಗೆ
ಅವಿತಿದ್ದ
ಮಾತುಗಳು, ಹನಿಗಳ
ತಂಪಿಗೆ ನಡುಗಿ
ಹೊರ-ಹೊಮ್ಮಬಹುದು....
ಸುಮ್ಮನೆ
ಸುಮ್ಮನೆ ಊರೆಲ್ಲ
ಸುತ್ತಿ ಬಂದ ಮೇಲೆ
ಗೊತ್ತಾಯ್ತು
ನಮ್ಮ ಮನೆಯ ನೀರಿನ
ರುಚಿ...
ನಿನ್ನಲಿ ನಾನು
ನನ್ನನು
ಕಾಣಲೆತ್ನಿಸಿದ್ದೇ
ದೊಡ್ಡ ದುರಂತ...
ನನ್ನ ಮುಗ್ಧ ಗೆಳತಿಗೆ
ಹೇಳಿದೆ. ಪೆದ್ದು, ನಮ್ಮ
ಹೃದಯದಲಿ ನಾಲ್ಕು
ಕವಾಟುಗಳಿವೆಯೆಂದು
ನಸುನಗುತ ಕೇಳಿದಳಾಕೆ
ಒಂದರಲ್ಲಿ ನಾನು ಇನ್ನು
ಉಳಿದವುಗಳಲಿ ಯಾರಿಹರೆಂದು..
ಹೇಳಿದೆ. ಪೆದ್ದು, ನಮ್ಮ
ಹೃದಯದಲಿ ನಾಲ್ಕು
ಕವಾಟುಗಳಿವೆಯೆಂದು
ನಸುನಗುತ ಕೇಳಿದಳಾಕೆ
ಒಂದರಲ್ಲಿ ನಾನು ಇನ್ನು
ಉಳಿದವುಗಳಲಿ ಯಾರಿಹರೆಂದು..
ಹಾಗೆ
ಏನಾದರು
ಆಗಲಿ
ನನ್ನೆದೆಯಲಿ ಧೂಳೆಬ್ಬಿಸಿ
ಏನು ಕಾಣುತ್ತಿಲ್ಲವೆಂದು
ಹಲುಬುತ್ತಿರುವ
ಅವಳ ಜಾಣತನಕ್ಕೆ
ನಾನು ಈಗ
ಬಿರುಗಾಳಿ ಆಗಲೆಬೇಕು..!!!
ನನ್ನೆದೆಯಲಿ ಧೂಳೆಬ್ಬಿಸಿ
ಏನು ಕಾಣುತ್ತಿಲ್ಲವೆಂದು
ಹಲುಬುತ್ತಿರುವ
ಅವಳ ಜಾಣತನಕ್ಕೆ
ನಾನು ಈಗ
ಬಿರುಗಾಳಿ ಆಗಲೆಬೇಕು..!!!