ಓ ಬದುಕೆ ನಾನು ನಿನ್ನನು ಬಣ್ಣಿಸಲೆ
ಬೇಕು. ನನಗೆ ನೀನು ಯಾಕೆ ಎಂಬ ಸವಾಲನ್ನು ಕೇಳಿದರೆ
ಅದರಿಂದ ನಾನು ಅಧೀರನಾಗಲಾರೆ,ವಿಚಲಿತವಂತು ಇಲ್ಲವೆ ಇಲ್ಲ…! ತಿಳಿದವರು ಆಡಿಕೋಳ್ಳುತ್ತಾರೆ ನಿನ್ನ
ದಾರಿಯಲಿ ನಾವು ಕೇವಲ ಕುರುಡ ಪಯಣಿಗರು ಅಂತೆಲ್ಲ.ಯಾಕೆ ನಾವು ಹುಟ್ಟಿದ ಮೇಲೆಯೆ ಅಲ್ಲೆವೆ ನಿನ್ನ ಜನನವಾಗಿದ್ದು?
ನಮ್ಮಿಂದ ನೀನು ವಿನಹಃ ನಿನ್ನಿಂದ ನಾವಲ್ಲ,ನಾವು ಜನಿಸದೆ ಇದ್ದಿದ್ದರೆ ನಮ್ಮ ಬದುಕು ನೀ???
ನಾವು ಪ್ರಕೃತಿ
ನಿರ್ಮಿತ ನೀನು ನಮ್ಮ ನಿರ್ಮಿತ.ನಾವು ನಿನ್ನನ್ನು ಆಳಬೇಕಾದರೆ ನಿನ್ನುನ್ನು ನಾವು ಮೊದಲು ಗೆಲ್ಲಲೆಬೇಕೆಂಬ
ಸತ್ಯವನ್ನು ಅರಿತ ಹುಂಬ ನಾನು. ನಾನು ನನ್ನಂತೆ ನನಗೆ ಬೇಕಾದ ರೀತಿ,ರೀವಾಜಿನಲಿ ನಿನ್ನನ್ನು ರೂಪಗೋಳಿಸಲು
ಅಲೆದಾಡಿದ ಗಲ್ಲಿ ಹಾದಿ-ಬೀದಿ ಒಂದೆ ಎರಡೇ…..? ದ್ವಂದ್ವ, ನಿರಾಶೆ, ಸೋಲು, ದಾರಿದ್ರ್ಯ, ಅಸಹ್ಯ,
ಬಡತನ, ನಿಸ್ಸಾಯಕತೆ,ಏದುಸಿರು ಹೀಗೆ ಸಂತೋಷದ ಕಿರು ನಗುಗಳಿಗಿಂತ ಈ ನಿರಾಶೆಯ ಬೃಹತ ಬವಣೆಗಳನ್ನೆ ನೀಡುತ್ತ
ಬಂದ ನಿನಗೆ ನಾನು ತೊಡೆತಟ್ಟಿ ನಿಂತು ನಾನು ನಿನ್ನ ಮುಂದೆ ಹೋರಾಡಲು ಕಾರಣ??ನನ್ನ ಜನನ ಮತ್ತು ಮರಣದ
ನಡುವಿನ ಅಂತರವ ಬೆಸೆಯುವ ನಿನ್ನ ಸುಂದರವಾಗಿಡಬೇಕೆನ್ನುವ ಒಂದೇ ಒಂದು ಮಹದಾಸೆಯಿಂದ.
ನಿನ್ನ ನಿರ್ಮಾಣದ
ಹಾದಿಯಲ್ಲಿಯೆ ಕಾಲ ಸೆವೆಸಿ ಕಾಲನ ಗರ್ಭ ಸೆರುವ ನಾವು, ಇಜ್ಜೋಡಿನ ಕವಲಾತಿ ಕವಲು ದಾರಿಯಲಿ ಪಯಣಿಸುತ್ತೆವೆ.
ಕಡಿದಾದ ಮಸನದ ಕಾಳ ಕಂಧಕದಲ್ಲು ಮುನ್ನುಗ್ಗುತ್ತೆವೆ ನಿನ್ನ ಕನಸಿನ ಕುದುರೆಯನೇರಿ. ಮಾತು, ಮೌನ, ಬಿಂಕು,
ಬಿಗುಮಾನದಲ್ಲಿ ಬೀಗುತ್ತೇವೆ ಭವಿಷ್ಯದ ನಿನ್ನ ವಾಸ್ತವ ನೆನೆದು.
ಒಂದು ಸುಂದರ ಬದುಕು
ನಿನ್ನದಾಗಲಿ ಎಂದು ಸದಾ ಸಹೃದಯರು ಅವರವರ ಪ್ರೀತಿ ಪಾತ್ರದಾರರಿಗೆ ಅಭಿನಂದಿಸುವದನ್ನು ನೋಡಿದಾಗಲೆಲ್ಲ
ನಿನ್ನ ಅಸ್ತಿತ್ವದ ಅರಿವು ಮನದಟ್ಟಾಗುತ್ತದೆ. ಏನೋ ಒಂದು ಜೀವನ ಬಿಡು, ಇಂದು ಇದ್ದು ನಾಳೆ ಸಾಯೋ ನಾವು ಹೇಗೋ ಆ ಭಗವಂತ ಮಡಿಗಿದ ಹಾಗೆ ಇದ್ದು ಹೋಗೋಣ
ಎಂಬ ಅಸಡ್ಡೆಯ ಮಾತು ಕೇಳಿದಾಗಲೆಲ್ಲ ಮರುಕ ಎನಿಸುತ್ತದೆ.ಸಿರಿತನ, ಬಡತನ ,ಸಂಘರ್ಷ,ಉದಾಸೀನ,ಏಕಾಂಗಿ
ಹೀಗೆ ಹಲವಾರು ರೂಪಗಳಲಿ ನಮ್ಮೀ ಜೀವನದಲ್ಲಿ ಮೇಳೈಸುವ ನೀನು ನಮ್ಮ ಜೀವಿತದ ದೊರೆ.ಒಂದು ಮಾತು ಬದುಕೇ..!!!
ನೀನು ಹೇಗೆ ಇದ್ದರು ಸರಿ, ಆದರೆ ನಿನ್ನನು ನೀ ಇರುವ ರೂಪದಲ್ಲಿಯೆ ನಿನ್ನ ಒಪ್ಪಿ-ಅಪ್ಪಿಕೊಳ್ಳುವ ಔಧಾರ್ಯ
ಮನೋಭಾವ ನಮಗೆ ಕರುನಿಸು….!!! ಹುಟ್ಟುಮನೆಯಿಂದ ಸಾವುಮರುಕ ಮನೆವರೆಗೂ ಚೂರು ನೆಮ್ಮದಿಯ ಕರುನಿಸು..!!!
ಇಂತಿ
ನಿನ್ನ...ಸಿ.ಎಸ್.ಮಠಪತಿ
No comments:
Post a Comment