ಏಕೆ ಬರುವೆ ಬಾಳಿಗೆ
ಬವಣೆ ತುಂಬಿದ ಬೇಗುದಿಯ ತೀರಕೆ
ಬವಣೆಯಾಚಿನ ಬದುಕಿಗೆ
ಕರೆದೋಯ್ಯಲಾಗದು ಈ ಬಡವಗೆ..
ಹುಚ್ಚು ಛಲದ ನಿಶ್ಯಕ್ತ ಕೈಗಳು
ಬರೆಯಬಹುದು ಎರಡು ಕವನವ
ಕವನಗಳೆ ನಮಗಲ್ಲ ು ಉದರಕೆ
ಕವಳ ಕಾಳ ವೃಷ್ಟಾನ್ನವು.
ಯಾವ ಅಡವಿಗೆ ಹೋಗಲಿ
ಯಾವ ಕಲ್ಲು ಮಣ್ಣು ತರಿಸಲಿ
ನಿನ್ನ ಇರುವಿಗೆ ಗೂಡು ಕಟ್ಟಲು
ಯಾವ ಕುಶಲ ಕರ್ಮಿಯ ಕರೆಸಲಿ,
ಬೇಡ ನೀ ಬರಬೇಡ ಬರೀ
ಬವಣೆ ತುಂಬಿದ ಬೇಗುದಿಯ ತೀರಕೆ
ಬವಣೆಯಾಚಿನ ಬದುಕಿಗೆ
ಕರೆದೋಯ್ಯಲಾಗದು ಈ ಬಡವಗೆ..
ಹುಚ್ಚು ಛಲದ ನಿಶ್ಯಕ್ತ ಕೈಗಳು
ಬರೆಯಬಹುದು ಎರಡು ಕವನವ
ಕವನಗಳೆ ನಮಗಲ್ಲ ು ಉದರಕೆ
ಕವಳ ಕಾಳ ವೃಷ್ಟಾನ್ನವು.
ನೂರು ಅಕ್ಷರ ನಾಲ್ಕು ಪದಗಳು
ಕಂಬನಿಯ ಹರಿಸುವ ನಾಲ್ಕು
ಭಾವನೆ ಏನು ಮಾಡವು
ಬಿರಿದ ಬದುಕಿಗೆ ಬಾರದಿರು ನೀ
ಬಾಳಿಗೆ..
ಯಾವ ಅಡವಿಗೆ ಹೋಗಲಿ
ಯಾವ ಕಲ್ಲು ಮಣ್ಣು ತರಿಸಲಿ
ನಿನ್ನ ಇರುವಿಗೆ ಗೂಡು ಕಟ್ಟಲು
ಯಾವ ಕುಶಲ ಕರ್ಮಿಯ ಕರೆಸಲಿ,
ಬೇಡ ನೀ ಬರಬೇಡ ಬರೀ
ಬವಣೆ ತುಂಬಿದ ಬಾಳಿಗೆ..
ಹರಿಯುತಿಹುದು ಸಿರಿತನದ ಹೊಳೆಯು
ಕಣ್ಣು ತೆರೆದು ನೋಡು ನೀ
ಧನಿಕ ನಿನ್ನ ಲಹರಿ ಬದುಕಿಗೆ
ಬರೆಯಬಹುದು ಮುನ್ನುಡಿ
ಕಾಣದಿರು ನೀ ಹುಚ್ಚುಗನಸನು
ಒಪ್ಪಿಕೋ ನನ ಮಾತನು...
ಸಿ.ಎಸ್.ಮಠಪತಿ
ಸಿ.ಎಸ್.ಮಠಪತಿ
No comments:
Post a Comment