Saturday 22 December 2012

ಮಹಿಳೆ ಅಬಲೆಯೇ? ಖಂಡಿತಾ ಅಲ್ಲ

ಮಹಿಳೆಯ ಮೇಲಿನ ಅತ್ಯಾಚಾರವನ್ನು ವಿರೋಧಿಸಿ ಬರೆದ ಲೇಖನ...




ನಾವು ಎಲ್ಲಿದ್ದೇವೆ? ಏನಾಗಿದ್ದೇವೆ ? ಏನು ಮಾಡುತ್ತಾ ಇದ್ದೇವೆ? ನಾವು ಮಾನವರೇ; ಹಾಗಾದಲ್ಲಿ; ಮಾನವನಲ್ಲಿ ಇರಬೇಕಾದ ಯಕಶ್ಚಿತ ಪ್ರಾಥಮಿಕ ಗುಣ, ವರ್ತನೆ,ನಡುವಳಿಕೆ,ಆಚಾರ,ವಿಚಾರ ಮತ್ತು ನೈತಿಕತೆ ಇರಬೇಕಲ್ಲವೇ. ಖಂಡಿತಾ! ಕೇವಲ ವಾಸ್ತವತೆಯ ಸಾರಲು ಇದ್ದರೆ ಸಾಲದು, ಅವು ನಮ್ಮ ಬದುಕಲಿ ಹಾಸುಹೊಕ್ಕಾಗಿ ಬದುಕಿನ ಪ್ರತಿ ಅಡಿ-ಅಡಿಯಲ್ಲು ಜಾಗೃತವಾಗಿರಬೇಕು. ಅಂದಾಗ ನಾವು ಮನುಷ್ಯರು ಎಂದು ಯಾವ ಸಂಕೋಚವಿಲ್ಲದೆ ಬಿಚ್ಚು ಮನಸ್ಸಿನಿಂದ ಹೇಳಿಕೊಳ್ಳಬಹುದು.

ನಾವೆಲ್ಲರು ಸಮುದಾಯ ಮತ್ತು ಸಮಾಜದ ಒಂದು ಪ್ರಮುಖ ಸಂವೇದನಾ ವಾಹಿನಿ. ನಾವು ಏನು ಮಾಡುತ್ತೇವೆಯೋ ಅದು ಸಾಮಾಜಿಕ ಜೀವನವನ್ನು ಪ್ರತಿಬಿಂಬಿಸುವ ದರ್ಪಣವಾಗಿಬಿಡುತ್ತದೆ. ಇಂದು ನಾವೆಲ್ಲ ನಮ್ಮ ಮನೆಯ ಆಚೆ ನಮ್ಮ ಬದುಕಿನ ಅರ್ಧ ಭಾಗವನ್ನು ಸೆವೆಸುತ್ತಿದ್ದೇವೆ. ಅಂದಾಗ ಸಾಮಾಜಿಕವಾಗಿ ನಮ್ಮ ನೈತಿತಕತೆಯ ಬಗ್ಗೆ ಕಿಂಚಿತ್ತಾದರು ಯೋಚಿಸುವುದು ಬೇಡವೆ. “ನನ್ನ ಮನೆಯೊಂದು ತಣ್ಣಗಿರಲಿ ಪರರ ಬದುಕ್ಕೊಂದು ನಮ್ಮ ದೌರ್ಜನ್ಯದಲಿ ದಹಿಸಿ ಹೋಗಲಿ”; ಎನ್ನುವಂತ ಧ್ಯೇಯವನ್ನು ಜೀವನದ ಮೂಲ ಮಂತ್ರವನ್ನಾಗಿಸಿಕೊಂಡರೆ ಅಂಥವರು ಸಮಾಜ ಕಂಟಕ ಶಕ್ತಿಯಾಗಿ ಬೆಳೆದುಬಿಡುತ್ತಾರೆಯೇ ವಿನಹಃ  ಮತ್ತೇನು ಅಲ್ಲ..!! ಇವತ್ತಿನ ಪ್ರಚಲಿತ ಜೀವನ ವಿದ್ಯಮಾನಗಳನು ನೋಡಿದರೆ ನಮ್ಮ ಮೈ-ಮನ ಕಂಪನಗೊಳ್ಳುತ್ತದೆ. ಎಂತೆಂಥ ಪಾಪ ಕಾರ್ಯಗಳಲಿ ಕೆಲವೊಂದಿಷ್ಟು ಜನ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆಂದರೆ, ತಮ್ಮ ಒಟ್ಟಾರೆ ಬದುಕನ್ನೇ ಪರರ ಅವನತಿಗಾಗಿ ಮುಡಿಪಾಗಿಟ್ಟಿದ್ದಾರೇನೋ ಎಂಬ ಆತಂಕ ನಮ್ಮನ್ನು ಕಾಡುತ್ತದೆ. ದಿನ ಬೆಳಗಾದರೆ ಒಂದಲ್ಲ ,ಎರಡಲ್ಲ ಹಲವಾರು ಸಮಾಜಿಕವಾಗಿ ಒಪ್ಪಿಕೊಳ್ಳಲಾಗದಂಥ ಚಟುವಟಿಕೆಗಳು ಇಂಥವರಿಂದ ಯಾವದೇ ಸಂಕೋಚ, ಭಯ ಇಲ್ಲದಯೇ ಸಮಾಜದ ಮುಖ್ಯವಾಹಿನಿಯಲ್ಲಿಯೇ ನಡೆಯುತ್ತಿರುವುದೊಂದು ಕೆಟ್ಟ ಬೆಳವಣಿಗೆ. ಇದು ಎಂಥ ದುರದೃಷ್ಟ…!! ಇದು ಮಾನವ ಮತ್ತು ಮಾನವೀಯತೆಯ ಅವನತಿಯ ಸಂಕೇತವೇ.?

ಅದರಲ್ಲೂ ಮಾತೆ ಸ್ವರೂಪ ಮಹಿಳೆಯರ ಮೇಲೆ ಎಸಗುತ್ತಿರುವ ಕಡು ಕೆಟ್ಟ ಕೃತ್ಯಗಳನ್ನು ನೋಡಿದಾಗ ನಮ್ಮ ಪುರುಷ ವರ್ಗದ ಮೇಲೆ ಅಸಹ್ಯ ಮನೋಭಾವ ಬೆಳೆಯುತ್ತದೆ. ಅಷ್ಟಕ್ಕೂ ಜನ ಇಂಥ ಕೃತ್ಯಗಳಲಿ ಏಕೆ ಭಾಗಿ ಯಾಗುತ್ತಿದ್ದಾರೆ. ಅವರಿಗೆ ಅರಿವಿನ ಒಳಗಣ್ಣು ಎನ್ನುವುದು ಇಲ್ಲವೆ? ಖಂಡಿತಾ ಇದೇ . ಆದರೆ, ಅದು ಅವರ ಮಾನಸಿಕ ದಿವಾಳಿತನ ಮತ್ತು ಅಹಂನಲಿ ಕೊಚ್ಚಿ ಹೋಗಿದೆ. ಅಂಥವರನ್ನು ಶಿಕ್ಷಿಸಲು ನಮ್ಮ ದೇಶದಲಿ ಸಡಿಲವಾದ ಕಾನೂನಿಂದ ಸಾಧ್ಯವಾಗುತ್ತಿಲ್ಲ ಎನ್ನುವುದೊಂದು ವಿಪರ್ಯಾಸದಂತೆ ಗೋಚರಿಸುತ್ತದೆ. ಒಂದಿಷ್ಟು ನಿರ್ಧಾಕ್ಷಿಣ್ಯ ಕ್ರಮಗಳನು ಕಾನೂನಿನ ಚೌಕಟ್ಟಿನಲ್ಲಿ ಸರಿಯಾದ ಸಮಯದಲ್ಲಿ ತೆಗೆದುಕೊಂಡರೆ ಇಂಥ ಕೃತ್ಯಗಳು ಇಂದಲ್ಲ ನಾಳೆ ಕಡಿಮೆ ಆಗಬಹುದು.ಆದರೆ ಇವೆಲ್ಲ ನೆಪವಾಗಿ ಬಿಡುತ್ತಿರುವುದು ಮತ್ತೊಂದು ದುರಂತ.

ಅಷ್ಟಕ್ಕೂ ಅವರು ಏಕೆ ಹೀಗೆ ಮಾಡುತ್ತಾರೆ? ಇದನ್ನು ಹತ್ತಿಕ್ಕುವುದು ಹೇಗೆ?
v  ತಮಗರಿವಿಲ್ಲದೆಯೇ ಅವರಲ್ಲಿ ಒಬ್ಬ ವಿಕೃತ ಮನೋಭಾವದ ಮನುಷ್ಯ ಹುಟ್ಟಿಕೊಳ್ಳುತ್ತಾನೆ. ಅರಿವಿನ ಪ್ರಪಂಚದಿಂದ ಅವರನ್ನು ದೂರ ಎಳೆದೊಯ್ದು BRUTALITIES, RAPE, EMOTIONAL AND SEXUAL HARROSMENT, AND SOME OF THE DELUSIONAL RITUALS ನಲ್ಲಿ ಭಾಗಿ ಯಾಗುವಂತೆ ಮಾಡುತ್ತಾನೆ. ನಿಮ್ಮಲ್ಲಿ ದಿನದಿಂದ ದಿನಕ್ಕೆ ಇಂಥ ತುಡಿತಗಳು ಹುಟ್ಟಿಕೊಳ್ಳುತ್ತಿದ್ದಂತೆ ಎಚ್ಚರವಾಗಿ ಕಾಮಾಂಧರೆ. ಮತ್ತು ನಿಮ್ಮಲ್ಲಿರುವ ಮಾನಸಿಕ ಖಾಯಿಲೆಗೆ ತಜ್ಞರಿಂದ ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳಿ. ಇಲ್ಲವಾದಲ್ಲಿ ಒಂದಲ್ಲ ಒಂದುದಿನ ಎಸಗಿದ ಕೃತ್ಯಕೆ ಅದೇ ಅಪರಾಧ ನಿಮ್ಮನ್ನು ತಿಂದು ಹಾಕುತ್ತದೆ ಎಚ್ಚರ..!!

v  ಕೆಲವೊಬ್ಬರು ಇಂಥ ಕೃತ್ಯಗಳಲಿ ತಮ್ಮ ಮಾನಸಿಕ ಅಸಮತೋಲನದಿಂದ ಭಾಗಿಯಾದರೆ ಹೆಚ್ಚಿನವರು ತಮ್ಮ ಸಮಾಜದಲ್ಲಿನ ಜಡತ್ವ ಮತ್ತು ಹಣ ಮತ್ತು ಅಧಿಕಾರದ ಅಮಲಿನಲಿ ತೇಲುತ್ತ ಯಾವ ಭಯವಿಲ್ಲದೆ ಸಿಕ್ಕ ಮಹಿಳೆಯನು ಅಬಲೆಯಂದರಿತು ತಮ್ಮ ಕೀಳು ಮನೋಭಿಲಾಸೆಗೆ ಆಹಾರವಾಗಿಸುತ್ತಾರೆ. ಇಂಥವರಿಗೆ ನಮ್ಮ ಸರಕಾರ ಹಾಗೂ ಕಾನೂನ ಏನು ಶಿಕ್ಷೆ ಕೊಡುತ್ತದೆ ಅನ್ನುವದಕ್ಕಿಂತ ನಮ್ಮ ಸಮಾಜ ಮತ್ತು ಅಂಥವರ ಕುಟುಂಬ ಹೇಗೆ ಅವರನ್ನು ದಂಡಿಸುತ್ತದೆ ಎನ್ನುವುದು ಮುಖ್ಯ.ಇಂಥವರಿಗೆ ಎಲ್ಲರೂ ಒಟ್ಟಾಗಿ ಬಹಿಷ್ಕಾರದ ಕುರುಹು ಎನ್ನುವಂತೆ ಸಾರಾಸಗಟಾಗಿ ದಂಡಿಸಬೇಕು ಮತ್ತು ಅವರು ಸಕಾಲದಲ್ಲಿಯೇ ಮಾಡಿದ ಘನ ಅಪರಾದಕ್ಕೆ ಬೆಲೆ ತೆರಬೇಕು.

v  ಅಂಥವರು ಸಹ ಒಂದು ಕುಟುಂಬದಿಂದ ಬಂದವರು ತಾನೇ? ಹೀಗಿದ್ದಾಗ ಅವರ ಕುಟುಂಬ ಸದಸ್ಯರೇಕೆ ಇವರನ್ನು ಗಮನಿಸುವುದಿಲ್ಲ .ಇವರು ಇಂಥವರು ಅಂತ ಗೊತ್ತಿದ್ದರು ಜಾಣ ಕುರುಡರಾಗುತ್ತಾರೆಯೇ? ಬೇಡ, ನಿಮ್ಮ ಮನೆಯ ಮನುಷ್ಯನನ್ನು ತಿದ್ದುವ ಹಕ್ಕು ಮತ್ತು ಅವಕಾಶ ನಿಮಗೆ ಮುಕ್ತ. ಆದ್ದರಿಂದ ಅಂಥವರನ್ನು ಕೌಟುಂಬಿಕ ಚೌಕಟ್ಟಿನಲ್ಲಿಯೇ ತಿದ್ದಿ ಸರಿ ಮಾರ್ಗಕೆ ತನ್ನಿ . ನೀವು ಬೆಳೆಸಿದ್ದರಿಂದಲ್ಲವೇ ವಿಷ ಬಳ್ಳಿ ಮನೆಯಿಂದ ಬೆಳೆದು ಬೀದಿವರೆಗೂ ಚಾಚಿದ್ದು. ಅಂದಾಗ ನೀವು ಏನು ಮಾಡುತ್ತಿದ್ದೀರಿ?

v  ಪ್ರಕೃತಿದತ್ತವಾಗಿ ದೇವರು ಎಲ್ಲವೂ ನೀಡಿರುವಾಗ ಅಮಾನುಷ ಕೃತ್ಯ ಬೇಕೆ..? ಶ್ರೀ ರಾಮರಂಥ ,ದೇವಾನು ದೇವತೆಗಳು ಜನ್ಮಸಿ ಜಗತ್ತಿಗೆ ದೈವತ್ವವನ್ನು ಹೇಳಿಕೊಟ್ಟ ಪುಣ್ಯ ನೆಲ ನಮ್ಮದು.ಇಲ್ಲಿ ಇಂಥ ಹೇಯ ಕೃತ್ಯಗಳು ಬೇಡವೇ ಬೇಡ.

v  ಕೊನೆಯದಾಗಿ ಮಹಿಳೆ ಅಬಲೆಯಲ್ಲ. ಜನ್ಮನೀಡುವ ಜನುಮದಾತೆ, ಸಾಕಿ ಸಲುವುವ ಕರುಣಾಮಯಿ. ತಾಳ್ಮೇ ಕಳೆದುಕೊಂಡರೆ  ಜಗತ್ತನ್ನೇ ದ್ವಂಸ ಮಾಡುವಂತಹ ಮಹಾದೇವತೆ. ರಕ್ಕಸತನವನ್ನು ಕೊಚ್ಚಿ ರಕ್ತ ಕುಡಿವ ಅಂಬೆ. ಇನ್ನು, ನೀವ್ಯಾವ ಮರದ ತೊಪ್ಪಲು. ಖಂಡಿತ ಅವಳ ದ್ವೇಷಾಗ್ನಿಯಲಿ ದಹಿಸಿ ಹೋಗುತ್ತೀರಿ. ಸತ್ಯಮಾರ್ಗದಿ ಬದುಕ ಬೇಕೆಂದರೆ ನಿಮ್ಮ ಅರಿವಿನ ಅಂತರಾತ್ಮವನು ಬಡಿದೆಬ್ಬಿಸಿ ಆತ್ಮಾನುಸಾರವಾಗಿ ಬಾಳಿ. ಮುಗ್ಧಮನದ ಮಹಿಳೆಯನು ಬಲಿಪಶುಮಾಡಬೇಡಿ. ನಿಮ್ಮಂಥವರಿಗೆ ನಮ್ಮಿಂದ ಧಿಕ್ಕಾರವಿದೆ ನೆನಪಿರಲಿ.

ಇಂದ.
ಸಿ.ಎಸ್. ಮಠಪತಿ

No comments:

Post a Comment